ಆರ್ಯ ಕ್ರಿಯೇಷನ್ಸ್ ಲಾಂಛನದಲ್ಲಿ ರಮೇಶ್ ಮಂಡ್ಯ ಹಾಗೂ ತಿಮ್ಮರಾಜು ನಿರ್ಮಿಸುತ್ತಿರುವ ‘ಅರ್ಜುನ ಚಿತ್ರದಲ್ಲಿ ದೇವರಾಜ್ ಹಾಗೂ ಪ್ರಜ್ವಲ್ದೇವರಾಜ್ ಅಭಿನಯಿಸಿದ್ದಾರೆ. ಆದರೆ ಚಿತ್ರದಲ್ಲಿ ಅವರು ಅಪ್ಪ-ಮಗನ ಪಾತ್ರ ನಿರ್ವಹಿಸಿಲ್ಲ. ದೇವರಾಜ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೇವರಾಜ್ ಹಾಗೂ ಪ್ರಜ್ವಲ್ದೇವರಾಜ್ ಇಬ್ಬರೂ ಈ ಸಿನಿಮಾದ ನಾಯಕರು ಎನ್ನುತ್ತಾರೆ ಚಿತ್ರದ ನಿರ್ದೇಶಕ ಪಿ.ಸಿ.ಶೇಖರ್.
ಕುತುಹಲಕಾರಿ ಕಥಾಹಂದವುಳ್ಳ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆದಿದೆ. ಸದ್ಯ ಅರ್ಜುನ್ಜನ್ಯ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ನಡೆಯುತ್ತಿದೆ.
ಅರ್ಜುನ್ಜನ್ಯ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಕುಮರನ್ ಅವರ ಛಾಯಾಗ್ರಹಣವಿದೆ. ಸರವಣ್ ಸಂಕಲನ ಹಾಗೂ ರವಿವರ್ಮರ ಸಾಹಸ ನಿರ್ದೇಶನ ‘ಅರ್ಜುನ ಚಿತ್ರಕ್ಕಿದೆ. ದೇವರಾಜ್, ಪ್ರಜ್ವಲ್ದೇವರಾಜ್, ಭಾಮ, ಕಡ್ಡಿಪುಡಿ ಚಂದ್ರು, ಗಿರೀಶ್, ರಮೇಶ್ಭಟ್, ರಾಜಶೇಖರ್ನಾಯ್ಡು, ‘ಪ್ರೀತಿ ಗೀತಿ ಇತ್ಯಾದಿ ಚಿತ್ರದ ನಿರ್ಮಾಪಕ ವಿಜಯ್ಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.